National

ಮದ್ಯ ಸೇವನೆ ಮಾಡುವವರು ಮಹಾ ಪಾಪಿಗಳು: ಅವರು ಭಾರತೀಯರಲ್ಲ ಎಂದ ಬಿಹಾರ ಸಿಎಂ

ಬಿಹಾರ: ಮದ್ಯ ಸೇವನೆ ಮಾಡುವವರ ವಿರುದ್ಧ ಬಿಹಾರ ಸಿಎಂ ನಿತೀಶ್ ಕುಮಾರ್ ಕಟು ಟೀಕೆ ಮಾಡಿದ್ದಾರೆ. ಮದ್ಯ ಸೇವಿಸುವವರೆಲ್ಲ ಮಹಾಪಾಪಿಗಳು, ಅವರು ನಿಜವಾದ ಭಾರತೀಯರಲ್ಲ ಎಂದು ಕಿಡಿ ಕಾರಿದ್ದಾರೆ. ಮದ್ಯ ಸೇವನೆ ಮಾಡುವವರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ ಅಂಥವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಏಕೆ..? ಎಂದು ಕಾಮೆಂಟ್ ಮಾಡಿದ್ದಾರೆ. ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಬಗ್ಗೆ ಸರ್ಕಾರ ಯಾವುದೇ ಜವಾಬ್ದಾರಿ ಹೊರುವುದಿಲ್ಲ ಮತ್ತು ಅವರ ಕುಟುಂಬಕ್ಕೆ ಯಾವುದೇ ನೆರವು ನೀಡುವುದಿಲ್ಲ ಎಂದು ಸಿಎಂ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮದ್ಯವ್ಯಸನಿಗಳು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ನಿರ್ಲಕ್ಷಿಸಿದ್ದಾರೆ ಅಂತಹ ಜನರ ಬಗ್ಗೆ ಏಕೆ ಕಾಳಜಿ ವಹಿಸಬೇಕು?  ಗಾಂಧೀಜಿ ಅವರು ಮದ್ಯಪಾನಕ್ಕೆ ವಿರುದ್ಧವಾಗಿದ್ದರು ಮತ್ತು ಅವರ ಸಿದ್ಧಾಂತಗಳನ್ನು ನಿರ್ಲಕ್ಷಿಸುವ ಮಾದಕ ವ್ಯಸನಿಗಳು ಮಹಾ ಪಾಪಿಗಳಲ್ಲದೆ ಮತ್ತೇನು..? ಅಂತಹವರನ್ನು ನಾನು ಭಾರತೀಯರೆಂದು ಗುರ್ತಿಸುವುದಿಲ್ಲ ಎಂದಿದ್ದಾರೆ.

ಬಿಹಾರದಲ್ಲಿ ಮದ್ಯಪಾನ ನಿಷೇಧ ಮಾಡುವುದಾಗಿ ನಿತೀಶ್‌ ಕುಮಾರ್‌ ಕುಮಾರ್‌ ಹೇಳಿದ್ದಾರೆ. ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅನೇಕರು ಮದ್ಯ ಸೇವಿಸುತ್ತಿದ್ದಾರೆ.ಅದರಿಂದ ಆಗುವ ಪರಿಣಾಮಗಳಿಗೆ ಅವರೇ ಕಾರಣ. ಮದ್ಯ ಸೇವನೆ ವಿಷಕ್ಕೆ ಸಮಾನ ಎಂದು ಗೊತ್ತಿದ್ರೂ  ಕುಡಿಯುತ್ತಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ಮದ್ಯವ್ಯಸನಿಗಳ ವಿರುದ್ಧ ಕಿಡಿಕಾರಿದರು. ಇದೀಗ ಸಿಎಂ ನೀಡಿರುವ ಹೇಳಿಕೆ ವಿರುದ್ಧ ಪ್ರತಿಪಕ್ಷಗಳು ಸಿ ಟೀಕೆ ಮಾಡುತ್ತಿವೆ.

Share Post