Bengaluru

ಟಿಪ್ಪು ವಿಚಾರವನ್ನು ಪಠ್ಯದಿಂದ ಕೈ ಬಿಡುವ ಮಾತೇ ಇಲ್ಲ-ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ಪಠ್ಯವನ್ನು ವೈಭವೀಕರಣ ಮಾಡಲಾಗುತ್ತಿದೆ. ಅದನ್ನು ಕೈಬಿಡಬೇಕು ಇಲ್ಲವೇ ಅದಕ್ಕೆ ಕತ್ತರಿ ಹಾಕಬೇಕು ಎಂದು ಸರ್ಕಾರಕ್ಕೆ ಮನವಿ ಪತ್ರಗಳು ಸಲ್ಲಿಕೆಯಾಗಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡಲು ಸರ್ಕಾರಕ್ಕೆ ಯಾವುದೇ ಆತುರವಿಲ್ಲ ಈಗಾಗಲೇ ಪಠ್ಯಪುಸ್ತಕಗಳು ಪ್ರಿಂಟ್‌ಗೆ ಹೋಗಿವೆ. ಪಠ್ಯ ಪರಿಷ್ಕರಣಾ ರಿಪೋರ್ಟ್‌ ಸರ್ಕಾರದ ಕೈ ಸೇರಿದೆ.

ಸಮಿತಿ ಕೂಡಾ ರಚನೆಯಾಗಿದ್ದು, ತಜ್ಞರು ಯಾವ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ ಕಾದು ನೋಡಬೇಕಿದೆ. ಸದ್ಯಕ್ಕಂತೂ ಟಿಪ್ಪು ಪಠ್ಯ ಕೈ ಬಿಡುವ ಯಾವುದೇ ಸೂಚನೆಗಳು ಇಲ್ಲ ಎಂದಿದ್ದಾರೆ.

Share Post