Districts

ವೀರಾಪುರದಲ್ಲಿ ಸಹೋದರರ ಕಲಹ; ಅಡಿಕೆ ತೋಟ ನಾಶ

ದಾವಣಗೆರೆ : ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಹೋದರರ ಕಲಹಕ್ಕೆ ಅಡಿಕೆ ತೋಟ ನಾಶವಾಗಿದೆ. ರಾತ್ರಿ ವೇಳೆ ಜೆಸಿಬಿ ತಂದು 15 ಗುಂಟೆ ಜಮೀನಿನಲ್ಲಿದ್ದ 20 ವರ್ಷದ ಹಳೆದ ಅಡಿಕೆ ಮರಗಳನ್ನು ನಾಶ ಮಾಡಲಾಗಿದೆ. 

  ವೀರಾಪುರ ಗ್ರಾಮದ ವೆಂಕಟೇಶಪ್ಪ, ಹನುಮಂತಪ್ಪ ಹಾಗೂ ವೀರೇಶಪ್ಪ ಮೂವರು ಸಹೋದರರಾಗಿದ್ದು, ಮೂವರು ಕೃಷಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಾರೆ. ಇದರಲ್ಲಿ ವೆಂಕಟೇಶಪ್ಪ ಅವರ ಪಾಲಿಗೆ ಬಂದಿದ್ದ ತೋಟದಲ್ಲಿನ ಅಡಿಕೆ ಮರಗಳು ಚೆನ್ನಾಗಿ ಬೆಳೆದಿದ್ದವು. ಇದರಿಂದಾಗಿ ಇತರ ಸಹೋದರರಾದ ಹನುಮಂತಪ್ಪ ಮತ್ತು ವೀರೇಶಪ್ಪ ಅವರು ಚೆನ್ನಾಗಿ ಬೆಳೆದಿರುವ ಅಡಿಕೆ ತೋಟವನ್ನು ಬಿಟ್ಟುಕೊಡುವಂತೆ ಕೇಳಿದ್ದಾರೆ. ಆದ್ರೆ ವೆಂಕಟೇಶಪ್ಪ ಇದಕ್ಕೆ ಒಪ್ಪಿಲ್ಲ.

ಹೀಗಾಗಿ ಸಹೋದರರೇ ಜೆಸಿಬಿ ತಂದು ರಾತ್ರೋರಾತ್ರಿ ಸಡಿಕೆ ಮರಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಚೆನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post