Cinema

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ: ಕುಟುಂಬಸ್ಥರೊಂದಿಗೆ ಮಾತನಾಡಿ ದಿನಾಂಕ ನಿಗದಿ-ಸಿಎಂ

ಬೆಂಗಳೂರು: ಕರುನಾಡ ಕೂಸು, ದೊಡ್ಮನೆ ಹುಡುಗ, ಅಭಿಮಾನಿ ದೇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಕಂಡರೆ ಸಿಎಂಗೆ ಕೂಡ ಅಪಾರ ಪ್ರೀತಿ. ಇಂದು ಅವರ ಜನ್ಮದಿನ ಅಪ್ಪು ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಸಮಾಜಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು. ಅವರು ಅಂಗಾಂಗ ದಾನ ಮಾಡೋದು ಅನ್ನೋದು ದೊಡ್ಡ ವಿಷಯ ಈ ವಿಚಾರದಲ್ಲಿ ಅವರು ನಮಗೆಲ್ಲರಿಗೂ ಆದರ್ಶ. ಅವರ ಈ ನಿರ್ಧಾರದಿಂದ ಇಂದು ಸಾವಿರಾರು ಅಭಿಮಾನಿಗಳು ಅಂಗಾಂಗ ದಾನ ಮಾಡಿದ್ದಾರೆ. ಇಮದು ಅವರ ಹುಟ್ಟಿದ ದಿನ, ಅದ್ರೆ ಅವರು ನಮ್ಮೊಂದಿಗಿಲ್ಲ ಎನ್ನುವ ಕೊರಗು ಮಾತ್ರ ಹಾಗೆ ಉಳಿದಿದೆ. ಇಂದು ಅವರ ಕೊನೆಯ ಚಿತ್ರ ಜೇಮ್ಸ್‌ ಬಿಡುಗಡೆ ಆಗಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.

ಕಳೆದ ವರ್ಷವೇ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ವಿ ಅದರ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ ಸದ್ಯದಲ್ಲೇ ನಟ ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ ಎಂದರು.

Share Post