Districts

ಅಧಿಕಾರಿ ಮನೆಯಲ್ಲಿ ನೋಟು ಎಣಿಸೋ ಯಂತ್ರ; ಶ್ರೀಗಂಧದ ತುಂಡು..!

ಬಾಗಲಕೋಟೆ: ಬೆಳ್ಳಂಬೆಳಗ್ಗೆ 18 ಅಧಿಕಾರಿಗಳ ಆಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದ್ರಲ್ಲಿ ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಅವರೂ ಕೂಡಾ ಒಬ್ಬರು. ಶಿವಾನಂದ ಅವರ ನಿವಾಸದಲ್ಲಿ ಪರಿಶೀಲನೆ ವೇಳೆ ನೋಟು ಎಣಿಸುವ ಯಂತ್ರ ಹಾಗೂ ಮೂರು ಕೆಜಿ ತೂಕದ ಶ್ರೀಗಂಧದ ತುಂಡುಗಳು ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.

ಶಿವಾನಂದ ಖೇಡಗಿ ಅವರು ವಿಜಯಪುರ ಮೂಲದವರಾಗಿದ್ದು, ಎರಡು ವರ್ಷಗಳಿಂದ ಬಾದಾಮಿ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂ 15 ರಲ್ಲಿರುವ ಅವರ ನಿವಾಸ, ಇಬ್ಬರು ಅಳಿಯಂದಿರ ಮನೆ, ಅಂಗಡಿ, ಬಾದಾಮಿಯ ಕಚೇರಿಯ ಮೇಲೆ ಏಕಕಾಲದಲ್ಲಿ ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ಬುಧವಾರ ನಸುಕಿನಲ್ಲಿ ದಾಳಿ ನಡೆಸಿದೆ.

Share Post