Districts

ವಿಜಯನಗರ ಜಿಲ್ಲೆಯಲ್ಲಿ ಭೀಕರ ಅಪಘಾತ; ಐವರು ದಾರುಣ ಸಾವು

ವಿಜಯನಗರ; ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಬಳಿಯ ಬಣವಿಕಲ್ಲು ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಸ್‌ ಪಲ್ಟಿಯಾಗಿದ್ದು, ಐವರು ದಾರುಣ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಒಂಬತ್ತು ಮಂದಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತರನ್ನು ವಂದಾಲ ಗ್ರಾಮದ ಸಿದ್ದಯ್ಯ ಕಾಳಗಿ (42), ನಿಡಗುಂದಿಯ ಕಲ್ಲವ್ವ(60), ಕಿರಾಳ್ ಗ್ರಾಮದ ಕುಂತ್ತವ್ವ (50), ಆಲಮಟ್ಟಿಯ ನೀಲಮ್ಮ(54), ನಿಡಗುಂದಿಯ ಲಕ್ಷ್ಮಿ ಬಾಯಿ (60) ಎಂದು ಗುರುತಿಸಲಾಗಿದೆ. ನಿಡಗುಂದಿಯಿಂದ ತಮಿಳುನಾಡಿನ ರಾಮೇಶ್ವರಂಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಾಧ್ಯೆ ಸಾವನ್ನಪ್ಪಿದ್ದಾರೆ.

Share Post