CrimeDistricts

ಅನುಮಾನದ ಪೆಡಂಭೂತದಿಂದ ಪ್ರೀತಿಸಿ ಮದುವೆಯಾದವಳಿಗೇ ಬೆಂಕಿ ಹಚ್ಚಿದ ಕಿರಾತಕ

ಹಾಸನ: ಮಾನವನ ಬದುಕಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ಒಮ್ಮೆ ಅನುಮಾನ ಎಂಬ ಪೆಡಂಭೂತ ಆತನನ್ನು ಹೊಕ್ಕರೆ ಅದು ದೊಡ್ಡ ದುರಂತಕ್ಕೆ ದಾರಿ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ. ಅಂತೆಯೇ ಇಲ್ಲೂ ಕೂಡ ಅನುಮಾನ ಎಂಬ ಭೂತದಿಂದ ತಾನು ಇಷ್ಟಪಟ್ಟು ಪ್ರೀತಿ ಮಾಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಲರ ಮಾಡಲು ಪ್ರಯತ್ನ ಪಟ್ಟ ಅಮಾನವೀಯ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಮರಡಿಕೆರೆ ಎಂಬ ಗ್ರಾಮದಲ್ಲಿ ನಡೆದಿದೆ.

ಐದು ವರ್ಷಗಳ ಹಿಂದೆ ಸತೀಶ್‌ ಹಾಗೂ ಭವ್ಯ ಇಬ್ಬರೂ ಪರಸ್ಪರ ಒಬ್ಬೊನ್ನೋಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಸತೀಶ್‌ಗೆ ಅನುಮಾನ ಎಂಬ ಪೆಡಂಭೂತ ವಕ್ಕಿರಿಸಿ ರಾತ್ರಿ ಪತ್ನಿ ಮಲಗಿದ್ದ ವೇಳೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಸಾಯುತ್ತಾಳೆ ಎಂಬ ಆತನ ಯೋಚನೆ ತಲೆಕೆಳಗಾಗಿ ಭವ್ಯ ಬದುಕಿದ್ದಾಳೆ, ಉಸಿರಾಡುತ್ತಿದ್ದನ್ನು ಕಂಡು  ಗ್ಯಾಸ್ ಲೀಕ್‌ ಈ ಅನಾಹುತ ನಡೆದಿದೆ ಎಂದು ಪೊಲೀಸರ ಬಳಿ ಹೇಳುವಂತೆ ಭವ್ಯಗೆ ಬೆದರಿಕೆ ಹಾಕಿದ್ದಾನೆ. ಪತಿ ಹೇಳಿಕೊಟ್ಟಂತೆ ಭವ್ಯ ಹೇಳಿದ್ದಾಳೆ. ಅನುಮಾನದಿಂದ ಮತ್ತೊಮ್ಮೆ ವಿಚಾರಿಸಿದಾಗ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.

ಇದೀಗ ಪಾಪಿ ಪತಿ ಪೊಲೀಸರ ಅತಿಥಿಯಾಗಿ ಜೈಲಿನಲ್ಲಿ ಮುದ್ದೆ ಮುರಿಯಲು ಸಿದ್ದವಾಗಿದ್ದಾನೆ. ಘಟನೆ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post