Bengaluru

ಉಕ್ರೇನ್‌ನಲ್ಲಿ ಸಿಎಂ ತವರಿನ ವಿದ್ಯಾರ್ಥಿ ಸಾವು; ಪೋಷಕರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ

ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಬಾಂಬ್‌ ದಾಳಿಗೆ ಸಾವನ್ನಪ್ಪಿರುವ ನವೀನ್‌ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ನವೀನ್‌ ಪೋಷಕರಿಗೆ ಕರೆ ಮಾಡಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಇನ್ನು ಹಾವೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮೃತ ವಿದ್ಯಾರ್ಥಿಯ ಮನೆಗೆ ತೆರಳಿ ಪೋಷಕರಿಗೆ ಧೈರ್ಯ ತುಂಬುವಂತೆಯೂ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ವಿದ್ಯಾರ್ಥಿ ನವೀನ್‌ ಅವರ ಊರು ಚಳಗೇರಿಯಲ್ಲಿ ನೀರವ  ಮೌನ ಆವರಿಸಿದೆ. ಊರಿನವರೆಲ್ಲಾ ನವೀನ್‌ ಮನೆ ಬಳಿ ದೌಡಾಯಿಸಿದ್ದಾರೆ. ಮೃತನ ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ.

Share Post