Bengaluru

ಅಪ್ಪು ಸಮಾಧಿಗೆ ಭೇಟಿ ನೀಡಿದ ತಮಿಳು ನಟ ದಳಪತಿ ವಿಜಯ್:ಪೂಜೆ ಸಲ್ಲಿಕೆ

ಬೆಂಗಳೂರು: ಕರ್ನಾಟಕ ರತ್ನ, ಜನ ಮೆಚ್ಚಿದ ನಾಯಕ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನರಾಗಿ ಇಂದಿಗೆ ನಾಲ್ಕು ತಿಂಗಳು ಕಳೆದಿವೆ. ಇಂದಿಗೂ ಅವರ ಸಾವನ್ನು ಕರ್ನಾಟಕ ಜನತೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅಪಪು ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದೇ ಅನಿಸುತ್ತಿದೆ. ಅವರ ನಿಧನಕ್ಕೆ ದೇಶಾದ್ಯಂತ ಇರುವ ಅಭಿಮಾನಿಗಳು, ಚಿತ್ರರಂಗ ಸಂತಾಪ ಸೂಚಿಸಿದ್ರು. ಆದರೆ ತಮಿಳು ನಟ ದಳಪತಿ ವಿಜಯ್‌ ಮಾತ್ರ ಈ ಬಗ್ಗೆ ಒಂದೇ ಒಂದು ಮಾತು ಕೂಡಾ ಆಡಿರಲಿಲ್ಲ.

ಆದರೆ ಇಂದರು ಅಚಾನಕ್ಕಾಗಿ ಯಾವುದೇ ಸೂಚನೆ ಕೂಡ ನೀಡದೆ ಬೆಂಗಳೂರಿಗೆ ಬಂದಿದ್ದಾರೆ. ಸೀದಾ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಪ್ಪು ನಿಧನರಾದಾಗಲೂ ಯಾವುದೇ ಪ್ರತಿಕ್ರಿಯೆ ನೀಡದ ನಟನ ವಿರುದ್ಧ ಅಸಮಾಧಾನ ಹೊಹೆಯಾಡುತ್ತಿತ್ತು. ಎಲ್ಲದಕ್ಕೂ ಬ್ರೇಕ್‌ ಹಾಕಲು ಇಂದು ಬಿಡುವು ಮಾಡಿಕೊಂಡು ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪೂಜೆ ಸಲ್ಲಿಕೆ ಬಳಿಕ ಮತ್ತೆ ತಮಿಳುನಾಡಿಗೆ ವಾಪಸಾಗಿದ್ದಾರೆ.

Share Post