Politics

ಸಂಪುಟ ಸೇರಲು ಲಾಬಿ; ರೇಣುಕಾಚಾರ್ಯ ಮನೆಯಲ್ಲಿ ಗರಿಗೆದರಿದ ರಾಜಕೀಯ

ಬೆಂಗಳೂರು: ಸಂಪುಟ ವಿಸ್ತರಣೆಗೆ ಲಾಬಿ ಜೋರಾಗುತ್ತಿದೆ. ಒಂದು ಕಡೆ ಸಿಎಂ ಬೊಮ್ಮಾಯಿಯವರು ಸೋಮವಾರ ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇತ್ತ ಅಂದೇ ದೆಹಲಿಗೆ ಬರುವಂತೆ ಶಾಸಕ ರೇಣುಕಾಚಾರ್ಯಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದೆ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಶಾಸಕ ರೇಣುಕಾಚಾರ್ಯ ಅವರ ನಿವಾಸಕ್ಕೆ ಸಚಿವಾಕಾಂಕ್ಷಿಗಳು ಬೆಳಗ್ಗೆಯಿಂದ ಭೇಟಿ ನೀಡುತ್ತಿದ್ದಾರೆ. ರೇಣುಕಾಚಾರ್ಯ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಹಲವು ಬಿಜೆಪಿ ಶಾಸಕರು ಭೇಟಿ ನೀಡಿ, ರೇಣುಕಾಚಾರ್ಯ ಅವರ ಜೊತೆ ಮಾತುಕತೆ ನಡೆಸಿದರು.

Share Post