Districts

ನಾನು ಹೌದು ಹುಲಿಯಾನೂ ಅಲ್ಲ, ಹೌದು ಕುರಿಯಾನೂ ಅಲ್ಲ; ಯು.ಟಿ.ಖಾದರ್‌

ಮಂಗಳೂರು: ನಾನು ಹೌದು ಹುಲಿಯಾನೂ ಅಲ್ಲ, ಹೌದು ಕುರಿಯಾನೂ ಅಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಇಬ್ರಾಹಿಂ ಅವರು ಪಕ್ಷ ಬಿಟ್ಟಿದ್ದಕ್ಕೆ ನನಗೆ ಅಧಿಕಾರಿ ಕೊಟ್ಟಿದ್ದಾರೆ ಎಂಬುದು ಸರಿಯಲ್ಲ. ನನಗೂ ಇಬ್ರಾಹಿಂ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ವಿಧಾನಸಸಭೆ ವಿಪಕ್ಷ ಉಪನಾಯಕನ ಸ್ಥಾನ ಕೊಟ್ಟಿದ್ದಕ್ಕೆ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ತನ್ವೀರ್‌ ಸೇಠ್‌ಗೆ ಅಸಮಾಧಾನ ಆಗಿದೆ ಎಂಬುದು ಸುಳ್ಳು ಸುದ್ದಿ. ನನಗೆ ಸ್ಥಾನ ಕೊಟ್ಟಿದ್ದಕ್ಕೆ ಯಾರೂ ಅಸಮಾಧಾನಗೊಂಡಿಲ್ಲ ಎಂದು ಇದೇ ಸಂದರ್ಭದಲ್ಲಿ ಯು.ಟಿ.ಖಾದರ್‌ ಹೇಳಿದ್ದಾರೆ.

Share Post