Crime

ಬೆಳೆ ಹಾಳು ಮಾಡುತ್ತಿತ್ತೆಂದು ಏಳು ನವಿಲು ಕೊಂದ ರೈತ

ತಿರುಪತ್ತೂರು (ತಮಿಳುನಾಡು): ಆಹಾರ ಅರಸಿ ಕೃಷಿ ಜಮೀನುಗಳಿಗೆ ಬರುತ್ತಿದ್ದ ನವಿಲುಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ. ವಿಷ ತಿಂದ ಏಳು ನವಿಳುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ಸಂಬಂಧ ಪೊಲೀಸರು ಮೇಘನಾಥನ್‌ ಎಂಬ ರೈತನನ್ನು ಬಂಧಿಸಿದ್ದಾರೆ.

     ಮೇಘನಾಥನ್‌ ಎಂಬಾತ ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿದ್ದ. ಆದರೆ ನವಿಲುಗಳು ಬಂದು ಅದನ್ನು ಹಾಳು ಮಾಡುತ್ತಿದ್ದವು. ಇದ್ರಿಂದ ಬೇಸತ್ತ ಆತ ಇಲಿ ಪಾಶಾಣ ಬೆರೆಸಿದ ಕಾಳುಗಳನ್ನು ಜಮೀನಿನಲ್ಲಿ ಚೆಲ್ಲಿದ್ದ. ಇದನ್ನು ತಿಂದ ನವಿಲುಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಈ ಸಂಬಂಧ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅನಂತರ ಪೊಲೀಸರು ಆರೋಪಿಯನ್ನು ಬಂಧಿಸಿದರು.

Share Post