Bengaluru

ಸೌಂದರ್ಯ ಇದ್ದ ಫ್ಲ್ಯಾಟ್‌ನಲ್ಲಿ ಪೊಲೀಸರಿಂದ ಮಹಜರು

ಬೆಂಗಳೂರು: ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಹೈಗ್ರೌಂಡ್ಸ್‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಬೆಳಗ್ಗೆಯೇ ಪೊಲೀಸರು ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡು ವಸಂತನಗರದ ಫ್ಲ್ಯಾಟ್‌ಗೆ ಆಗಮಿಸಿದ್ದರು. ಆದ್ರೆ, ಸೌಂದರ್ಯ ಪತಿ ಡಾ.ನೀರಜ್‌ ಎದುರಲ್ಲೇ ಮಹಜರು ನಡೆಯಬೇಕಿತ್ತು. ನೀರಜ್‌ ಬೆಳಗ್ಗೆ ಬಂದಿರಲಿಲ್ಲ. ಹೀಗಾಗಿ, ಸಂಜೆ ಮಹಜರು ನಡೆಸಲಾಯಿತು.

ಡಾ.ನೀರಜ್‌ ಹಾಗೂ ಮನೆಕೆಲಸದವರ ಸಮ್ಮುಖದಲ್ಲಿ ಪೊಲೀಸರು ಮಹಜರು ನಡೆಸಿದರು. ಫ್ಲ್ಯಾಟ್‌ನಲ್ಲಿ ಸೌಂದರ್ಯ ಅವರಿಗೆ ಸಂಬಂಧಿಸಿದ ಕೆಲ ವಸ್ತುಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಏನಾದರೂ ಬರೆದಿಟ್ಟಿದ್ದಾರಾ..? ಎಂಬುದರ ಬಗ್ಗೆಯೂ ಹುಡುಕಾಡಲಾಯಿತು.

Share Post