Bengaluru

ಕೊರೊನಾದಿಂದ ಆರ್ಥಿಕ ಸಂಕಷ್ಟ; ವಿಷ ಸೇವಿಸಿದ ಇಡೀ ಕುಟುಂಬ

ನೆಲಮಂಗಲ: ಕೊರೊನಾದಿಂದಾಗಿ ಸರಿಯಾಗಿ ಕೆಲಸ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಕ್ಯಾಬ್‌ ಚಾಲಕನ  ಕುಟುಂಬವೊಂದು ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನೆಲಮಂಗಲ ಬಳಿಯ ದಾಸರಹಳ್ಳಿ ಬಾಗಲಕುಂಟೆಯಲ್ಲಿ ನಡೆದಿದೆ. ಕ್ಯಾಬ್ ಚಾಲಕ ಭಾನುಪ್ರಕಾಶ್  ಕುಟುಂಬ ಕೊರೊನಾದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಭಾನುಪ್ರಕಾಶ್‌ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಹೀಗಾಗಿ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ.

   ಭಾನುಪ್ರಕಾಶ್‌, ಅವರ ಪತ್ನಿ ಗೀತಾ ಮತ್ತು ಅವರ ಮಗಳು ಲೇಖನ ಆತ್ಮಹತ್ಯೆಗೆ ಯತ್ನಿಸಿದವರು. ಮೂವರೂ ವಿಷಯ ಕುಡಿದಿದ್ದು, ಇದ್ರಲ್ಲಿ ಭಾನುಪ್ರಕಾಶ್‌ ಪತ್ನಿ ಗೀತಾ ಸಾವನ್ನಪ್ಪಿದ್ದಾರೆ. ಭಾನುಪ್ರಕಾಶ್‌ ಹಾಗೂ ಮಗಳು ಲೇಖನ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುಪ್ರಕಾಶ್‌ ಕ್ಯಾಬ್‌ ಓಡಿಸುತ್ತಿರುವುದರ ಜೊತೆಗೆ ಚೀಟಿ ವ್ಯವಹಾರ ನಡೆಸುತ್ತಿದ್ದರು. ಆದ್ರೆ, ಚೀಟಿ ಎತ್ತಿಕೊಂಡವರು ವಾಪಸ್‌ ಕಟ್ಟಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Share Post