Sports

ಸರಣಿ ಸೋಲು ನಮ್ಮ ಕಣ್ತೆರೆಸಿದೆ : ರಾಹುಲ್‌ ಡ್ರಾವಿಡ್

ಟೀಂ ಇಂಡಿಯಾದ ಕೋಚ್‌ ಅಗಿರುವ ರಾಹುಲ್‌ ಡ್ರಾವಿಡ್‌ ಅವರು ಮೂರನೇ ಏಕದಿನ ಪಂದ್ಯದ ಸೋಲಿನ ಬಳಿಕ ಮಾತನಾಡಿ ಈ ಸರಣಿ ಸೋಲು ನಮ್ಮ ಕಣ್ತೆರೆಸಿದೆ ಎಂದು ಹೇಳಿದ್ದಾರೆ. ಸರಣಿ ಸೋಲಿನ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಟೀಂ ಇಂಡಿಯಾ ಕೋಚ್‌ ರಾಹುಲ್‌ ಡ್ರಾವಿಡ್‌ ಅವರು ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ನಮ್ಮ ತಂಡ ಸುಧಾರಿಸಲಿದೆ ಎಂದು ಹೇಳಿದ್ದಾರೆ.

ವಿಶ್ವಕಪ್‌ ಬಳಿಕ ನಾವು ಹೆಚ್ಚು ಏಕದಿನ ಕ್ರಿಕೆಟ್‌ ಆಡಿಲ್ಲ, ಆದರೆ ಮುಂದಿನ ದಿನಗಳಲ್ಲಿ ಸಾಕಷ್ಟು ವೈಟ್‌ ಬಾಲ್‌ ಕ್ರಿಕೆಟ್‌ ಆಡಲಿದ್ದೇವೆ. 2023ರ ವಿಶ್ವಕಪ್‌ಗೆ ನಮಗೆ ಸಾಕಷ್ಟು ಸಮಯವಿದೆ. ಕಲಿಯುವಿಕೆಗೆ ಉತ್ತಮ ಸಮಯ ನಮಗೆ ಸಿಕ್ಕಿದೆ ಎಂದು ಡ್ರಾವಿಡ್‌ ಅಭಿಪ್ರಾಯ ಪಟ್ಟರು.

ಇನ್ನು ತಂಡದ ಪ್ರಮುಖ ಆಟಗಾರರಾದ ಕೆಲವರು ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಲಭ್ಯರಾಗಿದ್ದರು. ಇದು ಕೂಡ ತಂಡಕ್ಕೆ ಹಿನ್ನಡೆ ಆಗಿದೆ. ಇನ್ನು ದೀಪಕ್‌ ಚಹಾರ್‌ ಅವರು ಅದ್ಭುತವಾಗಿ ಆಡಿದರು ಎಂದು ಡ್ರಾವಿಡ್‌ ಹೇಳಿದ್ದಾರೆ.

ಇನ್ನು ಕೆ ಎಲ್‌ ರಾಹುಲ್‌ ಅವರು ನಾಯಕನಾಗಿ ಇನ್ನು ಈಗ ಶುರು ಮಾಡಿದ್ದಾರೆ. ಅವರು ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಸೋಲಿನಲ್ಲಿರುವ ತಂಡವನ್ನು ಮುನ್ನಡೆಸುವುದು ಅಷ್ಟು ಸುಲಭವಲ್ಲ ಎಂದು ಡ್ರಾವಿಡ್‌ ಹೇಳಿದ್ದಾರೆ.

Share Post