NationalPolitics

ಸಿದ್ದರಾಮಯ್ಯ ಸಿಎಂ ಕನ್ಫರ್ಮ್‌; ಪುಷ್ಪ ಅಮರನಾಥ್‌

ನವದೆಹಲಿ; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗೋದು ಕನ್ಫರ್ಮ್‌. ಕೆಲವೇ ಹೊತ್ತಿನಲ್ಲಿ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಹೇಳಿದ್ದಾರೆ. ದೆಹಲಿಯಿಂದ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನೂ ಕೂಡಾ ರಾಹುಲ್‌ ಗಾಂಧಿ ನಿವಾಸಕ್ಕೆ ತೆರಳಿದ್ದೆವು. ಈ ವೇಳೆ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡೋದು ಪಕ್ಕಾ ಆಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ನಾನು ಸೇರಿ ಹಲವು ನಾಯಕರು ರಾಹುಲ್‌ ಗಾಂಧಿ ನಿವಾಸಕ್ಕೆ ತೆರಳಿದ್ದೆವು. ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿಯವರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಒನ್‌ ಟು ಒನ್‌ ಮೀಟಿಂಗ್‌ ಇದಾಗಿತ್ತು. ಇದಾದ ನಂತರ ಸಿದ್ದರಾಮಯ್ಯ ಅವರು ಹಾಗೂ ರಾಹುಲ್‌ ಗಾಂಧಿಯವರು ಹೊರಬಂದರು. ಈ ವೇಳೆ ಎಲ್ಲರೂ ಸಿದ್ದರಾಮಯ್ಯ ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದರು ಎಂದು ಪುಷ್ಪ ಅಮರನಾಥ್‌ ತಿಳಿಸಿದ್ದಾರೆ.

Share Post