BengaluruPolitics

ʻಪೆನ್‌ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಕೊಟ್ಟಿದ್ರಂತೆʼ

ಬೆಂಗಳೂರು; ಪೆನ್‌ ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಬಿಜೆಪಿಯ ನಾಯಕರು, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಪರ್ಮಿಷನ್‌ ಕೊಟ್ಟಿದ್ದರು ಎಂದು ವಕೀಲ ದೇವರಾಜೇಗೌಡ ನನ್ನ ಬಳಿ ಹೇಳಿದ್ದಾರೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಬಾಂಬ್‌ ಸಿಡಿಸಿದ್ದಾರೆ..

ವಕೀಲ ದೇವರಾಜೇಗೌಡ ಅವರು ನಿನ್ನೆ ಆಡಿಯೋ ಒಂದು ರಿಲೀಸ್‌ ಮಾಡಿದ್ದರು.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್‌.ಆರ್‌.ಶಿವರಾಮೇಗೌಡ ಅವರು, ಪೆನ್‌ ಡ್ರೈವ್‌ ರಿಲೀಸ್‌ ಮಾಡಿದ್ದ ವಕೀಲ ದೇವರಾಜೇಗೌಡ ಅವರು.. ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ.. ಪೆನ್‌ ಡ್ರೈವ್‌ ರಿಲೀಸ್‌ ಮಾಡಲು ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರೇ ಒಪ್ಪಿಗೆ ಕೊಟ್ಟಿದ್ದರು ಎಂದು ದೇವರಾಜೇಗೌಡ ನನ್ನ ಬಳಿ ಹೇಳಿದ್ದಾರೆ ಎಂದು ಶಿವರಾಮೇಗೌಡ ಆರೋಪ ಮಾಡಿದ್ದಾರೆ..

ಯಾರೋ ಹೊಳೆನರಸೀಪುರದ ಕಡೆಯವರು ಬಂದು ದೇವರಾಜೇಗೌಡ ನಿಮ್ಮ ಬಳಿ ಮಾತನಾಡಬೇಕು ಅಂದ್ರು. ಅನಂತರ ಎಂಜಿ ರಸ್ತೆಯಲ್ಲಿ ದೇವರಾಜೇಗೌಡ ನನ್ನ ಜೊತೆ ಮಾತನಾಡಿದ್ದರು ಎಂದು ಶಿವರಾಮೇಗೌಡ ಹೇಳಿದ್ದಾರೆ.. ದೇವರಾಜೇಗೌಡರು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿದ್ದರು.. ಆದ್ರೆ ಅದಕ್ಕೆ ಡಿ.ಕೆ.ಶಿವಕುಮಾರ್‌ ಒಪ್ಪಲಿಲ್ಲ.. ನಾನೇ ಫೋನ್‌ ಮಾಡಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾತನಾಡಿಸಿದೆ.. ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು ನಿಮ್ಮ ಬಳಿ ಇರುವ ದಾಖಲೆಗಳನ್ನು ಎಸ್‌ಐಟಿ ಕೊಡಿ ಎಂದಷ್ಟೇ ಹೇಳಿದರು ಎಂದು ಶಿವರಾಮೇಗೌಡ ಸಮಜಾಯಿಷಿ ಕೊಟ್ಟಿದ್ದಾರೆ..

 

Share Post