Politics

ಕುಮಾರಸ್ವಾಮಿ ಚನ್ನಪಟ್ಟಣಕ್ಕಾಗಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ; ಡಿ. ಕೆ. ಸುರೇಶ್

ರಾಮನಗರ; ನಿನ್ನೆಯಷ್ಟೇ ಕೇಂದ್ರ ಸಚಿವ ಖಾತೆ ಪಡೆದುಕೊಂಡಿರುವ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಂತೆ.. ಹೀಗಂತ ಹೇಳಿದ್ದು ಮಾಜಿ ಸಂಸದ ಡಿ. ಕೆ. ಸುರೇಶ್.. ಕುಮಾರಸ್ವಾಮಿಯವರು ಮಂಡ್ಯ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ.. ಚನ್ನಪಟ್ಟನ ಶಾಸಕ ಸ್ಥಾನ ಉಳಿಸಿಕೊಳ್ತಾರೆ ಅಂತ ಹೇಳಿದ್ದಾರೆ..

ಚನ್ನಪಟ್ಟಣದಲ್ಲಿಂದು ಮಾತನಾಡಿದ ಡಿಕೆ ಸುರೇಶ್, ಈ ರೀತಿ ವ್ಯಂಗ್ಯ ಮಾಡಿದ್ದಾರೆ.. ಕುಮಾರಸ್ವಾಮಿ ಅವ್ರಿಗೆ ಅಧಿಕಾರಕ್ಕಿಂತ ಜನ ಕಾರ್ಯಕರ್ತರು ಮುಖ್ಯ. ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು ಅಂತ ಈ ಹಿಂದೆ ಹೇಳಿದ್ದರು.. ಹೀಗಾಗಿ ಅವ್ರು ಚನ್ನಪಟ್ಟಣವನ್ನೇ ಉಳಿಸಿಕೊಳ್ಳುವ ನಂಬಿಕೆ ಇದೆ ಎಂದಿದ್ದಾರೆ..

 

Share Post