DistrictsNationalPolitics

ನಮಾಜ್‌ ಸೌಂಡ್‌ ಕೇಳಿ ಭಾಷಣ ನಿಲ್ಲಿಸಿದ ರಾಹುಲ್‌ ಗಾಂಧಿ

ತುಮಕೂರು; ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ ಅಭ್ಯರ್ಥಿ ಬೆಮೆಲ್‌ ಕಾಂತರಾಜು ಪರ ಪ್ರಚಾರ ನಡೆಸಿದರು. ರಾಹುಲ್‌ ಭಾಷಣ ಮಾಡುತ್ತಿದ್ದ ವೇಳೇ ಪಕ್ಕದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್‌ ಶುರುವಾಗಿದೆ. ಇದು ಕೇಳುತ್ತಿದ್ದಂತೆ ರಾಹುಲ್‌ ಅವರು ಭಾಷಣ ನಿಲ್ಲಿಸಿ ಗೌರವ ಸೂಚಿಸಿದರು. ನಮಾಜ್‌ ಮುಗಿದ ನಂತರ ಭಾಷಣ ಮುಂದುವರೆಸಿದರು.

ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ, ರಾಜ್ಯ ಬಿಜೆಪಿ ಸರ್ಕಾರ ನಲವತ್ತು ಪರ್ಸೆಂಟ್‌ ಸರ್ಕಾರ ಎಂದು ಆರೋಪಿಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ಆದ್ರೆ ಅವರು ಶಾಸಕರನ್ನು ಖರೀದಿ ಮಾಡಿದರು ಎಂದು ಆರೋಪಿಸಿದರು.

 

Share Post