National

ಮೊಬೈಲ್‌ ರಿಚಾರ್ಜ್‌ ಮಾಡಿಸದಿದ್ದಕ್ಕೆ ಮಾನಸಿಕ ಖಿನ್ನತೆ; ಬಾಲಕ ಆತ್ಮಹತ್ಯೆಗೆ ಶರಣು

ಭೋಪಾಲ್: ಮೊಬೈಲ್‌ ಇಂಟರ್‌ನೆಟ್‌ ಡೇಟಾ ರೀಚಾರ್ಜ್‌ ಮಾಡಿಸದೇ ಇದ್ದುದಕ್ಕೆ ಮನನೊಂದು ಹದಿನಾಲ್ಕು ವರ್ಷದ ಬಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.  ಬಾಲಕ ಮೊಬೈಲ್‌ ವ್ಯವಸನಿಯಾಗಿದ್ದು, ದಿನವೂ ಮೊಬೈಲ್‌ ಹಿಡಿದುಕೊಂಡೇ ಇರುತ್ತಿದ್ದ. ಹೀಗಾಗಿ ಆತನ ತಂದೆ ಡೇಟಾ ರೀಚಾರ್ಜ್‌ ಮಾಡಿಸೋದಿಲ್ಲ ಎಂದಿದ್ದಾರೆ. ಇದ್ರಿಂದ ಮನನೊಂದು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊಬೈಲ್‌ ಬಳಸಲು ಆಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share Post