National

ಸೇನಾ ಹೆಲಿಕಾಪ್ಟರ್‌ ದುರಂತ; ಮೃತ ಹರ್ಜಿಂದರ್‌ ಸಿಂಗ್‌ ಕಾರ್ಕಳದ ಅಳಿಯ

ಉಡುಪಿ: ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌ ಕರ್ನಾಟಕದ ಕಾರ್ಕಳದ ಅಳಿಯ ಎಂದು ಗೊತ್ತಾಗಿದೆ. ಇಲ್ಲಿನ ಪಿಲಿಪ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ಅವರ ಪುತ್ರಿಯನ್ನು ಹರ್ಜಿಂದರ್‌ ಮದುವೆಯಾಗಿದ್ದರು. ೧೫ ವರ್ಷಗಳ ಹಿಂದೆ ಪ್ರಫುಲ್ಲ ಮಿನೇಜಸ್ ಅವರನ್ನು ವರಿಸಿದ್ದ ಹರ್ಜಿಂದರ್ ಸಿಂಗ್ ಕುಟುಂಬ ಸಮೇತ ದೆಹಲಿಯಲ್ಲಿ ನೆಲೆಸಿದ್ದರು. ನಾಲ್ಕು ವರ್ಷಗಳ ಹಿಂದೆ ಕುಟುಂಬ ಸಮೇತ ಅವರು ಮಾವನ ಮನೆಗೆ ಬಂದಿದ್ದರು.


ಹರ್ಜಿಂದರ್‌ ಸಿಂಗ್‌ ಯಾವಾಗಲೂ ಸೌಮ್ಯವಾಗಿರುತ್ತಿದ್ದರು. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ದರು. ಎಲ್ಲದಕ್ಕೂ ಶಾಂತವಾಗಿ ಉತ್ತರ ನೀಡುತ್ತಿದ್ದರು ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಾರ್ಕಳದಲ್ಲಿರುವ ಸಂಬಂಧಿಗಳಲ್ಲಿ ದುಃಖ ಮಡುಗಟ್ಟಿದೆ.

Share Post