NationalPolitics

ಕಾಂಗ್ರೆಸ್‌ ಪಕ್ಷ ಚಿಂತಾಜನಕವಾಗಿದೆ, ಕಾಂಗ್ರೆಸ್‌-ಭಾರತ ಭಿನ್ನವಾಗಿ ಯೋಚಿಸ್ತಿವೆ; ಮನಿಶ್‌ ತಿವಾರಿ

ನವದೆಹಲಿ; ಪಕ್ಷದ ಪರಿಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎರಡು ವರ್ಷಗಳ ಹಿಂದೆ 23 ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವೆ. ಆ ಪತ್ರದ ನಂತರ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಮತ್ತು ಭಾರತ ವಿಭಿನ್ನವಾಗಿ ಯೋಚಿಸಲು ಆರಂಭಿಸಿವೆ’ ಎಂದು ಕಾಂಗ್ರೆಸ್‌ ಸಂಸದ ಮನೀಶ್ ತಿವಾರಿ ಹೇಳಿದರು.

ಕಾಂಗ್ರೆಸ್ ತೊರೆದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು, ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದರು. ರಾಹುಲ್‌ ಅವರ ಅಪ್ರಬುದ್ಧತೆ ಮತ್ತು ಬಾಲಿಶ ಕ್ರಮಗಳು ಕಾಂಗ್ರೆಸ್‌ ಅನ್ನು ಸಂಪೂರ್ಣ ನಾಶ ಮಾಡಿವೆ ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನೀಶ್‌ ತಿವಾರಿ ಶನಿವಾರ ಮಾತನಾಡಿದ್ದಾರೆ. ಆಜಾದ್ ಅವರ ಪತ್ರಕ್ಕಿರುವ ಯೋಗ್ಯತೆ ಬಗ್ಗೆ ನಾನು ಮಾತನಾಡಲಾರೆ. ಪತ್ರ ಯಾಕೆ ಮತ್ತು ಅದರ ಸಂದರ್ಭದ ಬಗ್ಗೆ ವಿವರಿಸಲು ಅವರೇ ಸೂಕ್ತರು. ಆದರೆ, ಪತ್ರ ಈಗ ಬಹಿರಂಗವಾಗಿದೆ. ಸ್ವತಃ ಪತ್ರವೇ ಎಲ್ಲವನ್ನೂ ಮಾತನಾಡುತ್ತಿದೆ ಎಂದು ಸಂಸದ ತಿವಾರಿ ಹೇಳಿದ್ದಾರೆ.

‘ಆದರೆ, ಒಂದು ವಾರ್ಡ್ ಚುನಾವಣೆಯಲ್ಲಿ ಹೋರಾಡುವ ಸಾಮರ್ಥ್ಯವಿಲ್ಲದವರು, ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಮಾತನಾಡಲಾಗದವರು, ನಿನ್ನೆಯವರೆಗೆ ಕಾಂಗ್ರೆಸ್ ನಾಯಕರ ʻಚಪ್ರಾಸಿ’ಗಳಾಗಿದ್ದವರು (ಪ್ಯೂನ್), ಪಕ್ಷಕ್ಕೆ ತಿಳಿವಳಿಕೆ ನೀಡುತ್ತಿರುವುದು ಮೂರ್ಖತನ. ಇದು ನಗು ತರಿಸುವ ವಿಷಯ’ ಎಂದರು. ‘ಪಕ್ಷವು ಗಂಭೀರ ಸ್ಥಿತಿಯಲ್ಲಿದೆ. ವಿಷಾದನೀಯ, ದುರದೃಷ್ಟಕರ ಎನಿಸುವ ಇಂಥ ಸಂಗತಿಗಳನ್ನು ಬಹುಶಃ ತಪ್ಪಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ’ ಎಂದೂ ತಿವಾರಿ ಹೇಳಿದ್ದಾರೆ.

Share Post