CrimeDistrictsNational

ಕೇಂದ್ರ ಇಂಟೆಲಿಜೆನ್ಸ್‌ ಬ್ಯೂರೊ ನಿವೃತ್ತ ಅಧಿಕಾರಿ ಕೊಲೆ

ಮೈಸೂರು; ಮೈಸೂರಿನಲ್ಲಿ ವಾಸವಿರುವ ಕೇಂದ್ರ ಇಂಟಲಿಜೆನ್ಸ್ ಬ್ಯೂರೊನ ನಿವೃತ್ತ ಅಧಿಕಾರಿಯ ಮೇಲೆ ಕಾರು ಹರಿಸಿ ಕೊಲೆ ಮಾಡಲಾಗಿದೆ. 83 ವರ್ಷ ವಯಸ್ಸಿನ ಆರ್.ಎಸ್.ಕುಲಕರ್ಣಿ ವಾಕಿಂಗ್‌ ಮಾಡುವಾಗ ಕಾರು ಹರಿಸಿ ಕೊಲೆ ಮಾಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿಯಿಂದಾಗಿ ಅದು ಉದ್ದೇಶಪೂರ್ವಕ ಕೊಲೆ ಎಂದು ಗೊತ್ತಾಗಿದೆ.

ಮಾನಸ ಗಂಗೋತ್ರಿ ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಷದ ರಸ್ತೆಯಲ್ಲಿ ಕುಲಕರ್ಣಿ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಅವರ ಮೇಲೆ ನಂಬರ್‌ ಪ್ಲೇಟ್‌ ಇಲ್ಲದ ಕಾರನ್ನು ಹತ್ತಿಸಿ ದುಷ್ಕರ್ಮಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕುಲಕರ್ಣಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೊದಲಿಗೆ ಇದು ಅಪಘಾತ ಎಂದೇ ಭಾವಿಸಲಾಗಿತ್ತು. ಆದ್ರೆ ಸಿಸಿಟಿವಿ ಪರಿಶೀಲಿಸಿದಾದ ಕುಲಕರ್ಣಿಯವರು ರಸ್ತೆ ಬದಿ ನಿಂತಿದ್ದರು. ಈ ವೇಳೆ ಬೇಕಂತಲೇ ಅಪಘಾತ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಇದಕ್ಕೆ ಕಾರಣ ಏನು..? ಯಾರು ಕೊಲೆ ಮಾಡಿದರು..? ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ.

Share Post