BengaluruHealth

ಹಿರಿಯ ಪತ್ರಕರ್ತ ಗಣೇಶ್‌ ಅನಾರೋಗ್ಯದಿಂದ ನಿಧನ

ಬೆಂಗಳೂರು; ನ್ಯೂಸ್‌ ಚಾನಲ್‌ಗಳಲ್ಲಿ ಕ್ರೈಂ ವರದಿ ಮಾಡುವುದರಲ್ಲಿ ಹೆಸರಾಗಿದ್ದ ಗಣೇಶ್‌ ಅನಾರೋಗ್ಯದಿಂದ ನಿಧನರಾಗಿದ್ದಾರೆ.. ಬೆಂಗಳೂರಿನ ಜೈನ್‌ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ..
ಅವರ ಸ್ವಂತ ಗ್ರಾಮವಾದ ಮಾಗಡಿ ತಾಲ್ಲೂಕಿನ ತಾಳೆಕೆರೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.. ಕಸ್ತೂರಿ ಟಿವಿಯಿಂದ ಕೆಲಸ ಶುರು ಮಾಡಿದ ಗಣೇಶ್‌ ಅವರು, ಪ್ರಜಾ ಟಿವಿ, ನ್ಯೂಸ್‌ 18 ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕ್ರೈಂ ವರದಿಗಾರರಾಗಿ , ಕ್ರೈಂ ಬ್ಯೂರೋ ಮುಖ್ಯಸ್ಥರಾಗಿ, ಇನ್‌ಪುಟ್‌, ಔಟ್‌ ಪುಟ್‌ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.. ಸದ್ಯ ಟಿವಿ5ನಲ್ಲಿ ಅವರು ಇನ್‌ಪುಟ್‌ ಮುಖ್ಯಸ್ಥರಾಗಿದ್ದರು..

Share Post