Districts

ಹೆದ್ದಾರಿಯಲ್ಲಿ ಹರಿಯುತ್ತಿದೆ ಮಳೆ ನೀರು; ಹತ್ತು ಕಿಲೋ ಮೀಟರ್‌ ಟ್ರಾಫಿಕ್‌ ಜಾಮ್‌

ತುಮಕೂರು; ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ತುಮಕೂರು ಬಳಿಯ ಹೆಬ್ಬಾಕ ಕೆರೆ ಕೋಡಿ ಹರಿದಿದೆ. ಈ ಹಿನ್ನೆಲೆಯಲ್ಲಿ ನೀರೆಲ್ಲಾ, ರಾಷ್ಟ್ರೀಯ ಹೆದ್ದಾರಿ 48ಕ್ಕೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ಊರುಕೇರಿ ಗ್ರಾಮದ ಗ್ರಾಮದ ಬಳಿ ಇಂದು ಬೆಳಗ್ಗೆ ಮೊಣಕಾಲು ಮಟ್ಟಕ್ಕೆ ನೀರು ಹರಿಯುತ್ತಿತ್ತು. ಇದ್ರಿಂದ ತುಮಕೂರು-ಬೆಂಗಳೂರು ಮಾರ್ಗ ಹಾಗೂ ತುಮಕೂರು-ಶಿರಾ ಮಾರ್ಗದ ಕೋರಾವರೆಗೂ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಸುಮಾರು 10 ಕಿಲೋ ಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿನಿಂತಿವೆ. ಇದ್ರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

Share Post