DistrictsPolitics

ಸ್ವಲ್ಪ ಹೊತ್ತು ಸಿಎಂ, ಡಿಸಿಎಂ ಮಾತಾಡಲಿಲ್ಲ; ಭಾಷಣದ ವೇಳೆ ಡಿಕೆಶಿ ಹೆಸರು ಹೇಳಲಿಲ್ಲ ಸಿಎಂ

ಗದಗ; ಇಂದು ಗದಗದಲ್ಲಿ ಕರ್ನಾಟಕ ಸಂಭ್ರಮ-೫೦ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಇಬ್ಬರೂ ಅಕ್ಕಪಕ್ಕದಲ್ಲೇ ಕುಳಿತಿದ್ದರು. ಆದ್ರೆ ಸುಮಾರು ಹದಿನೈದು ನಿಮಿಷಗಳವರೆಗೆ ಇಬ್ಬರೂ ಒಂದು ಮಾತನ್ನೂ ಆಡಲಿಲ್ಲ. ಇಬ್ಬರೂ ಏನನ್ನೋ ಯೋಚಿಸುತ್ತಾ, ಓದುತ್ತಾ ಕುಳಿತಿರುವಂತಿತ್ತು. ಹದಿನೈದು ನಿಮಿಷಗಳ ಬಳಿಕ ಇಬ್ಬರೂ ಮಾತನಾಡಿದರು.

ವೇದಿಕೆ ಮೇಲೆ ಭಾಷಣ ಶುರು ಮಾಡಿದ ಸಿಎಂ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಸಚಿವರು, ಶಾಸಕರು, ಗಣರ ಹೆಸರುಗಳನ್ನೆಲ್ಲಾ ಹೇಳಿದರು. ಆದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೆಸರು ಹೇಳಲಿಲ್ಲ. ಇದರಿಂದಾಗಿ ಯಾರೋ ಒಬ್ಬರು ಡಿ.ಕೆ.ಶಿವಕುಮಾರ್‌ ಅವರು ಹೆಸರು ಹೇಳಲಿಲ್ಲ ಎಂದು ಕೂಗಿ ಹೇಳಿದರು. ಆಗ ಜ್ಞಾಪಿಸಿಕೊಂಡ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹೆಸರು ಮರೆತಿದ್ದೇನೆ ಎಂದರು.

Share Post