DistrictsPolitics

ಪ್ರಧಾನಿ ನರೇಂದ್ರ ಮೋದಿ ಭೇಟಿ‌ ಹಿನ್ನೆಲೆ; NH206 ರಸ್ತೆಯಲ್ಲಿ ಮಾರ್ಗ ಬದಲಾವಣೆ

ತುಮಕೂರು; ಫೆ. 6 ರಂದು ಪ್ರಧಾನಿ ಮೋದಿ ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 206 ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ‌.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಬಳಿಯಿರುವ ಹೆಚ್ ಎ ಎಲ್ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ‌ 6 ರಂದು ರಾಷ್ಟ್ರೀಯ ಹೆದ್ದಾರಿ 206 ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹಾಗೂ ಕೆಬಿ ಕ್ರಾಸ್ ನಡುವಿನ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಈ ಮಾರ್ಗದಲ್ಲಿ ಹೆಚ್ ಎ ಎಲ್ ಮುಂಭಾಗದಲ್ಲಿ ಬಾರಿ ಸರಕು ವಾಹನ, ಕೆಎಸ್ ಆರ್ ಟಿ ಸಿ ಬಸ್ ಗಳ ಸಂಚಾರವನ್ನ ರದ್ದು ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶ ಮಾಡಿದ್ದಾರೆ.

ತುಮಕೂರಿನಿಂದ ನಿಟ್ಟೂರು ಮಾರ್ಗವಾಗಿ ತಿಪಟೂರು ಕಡೆಗೆ ತೆರಳುವ ವಾಹನಗಳು ನಿಟ್ಟೂರಿನಿಂದ ಎಡಕ್ಕೆ ಚಲಿಸಿ, ಟಿ ಬಿ ಕ್ರಾಸ್-ತುರುವೇಕೆರೆ ಮೂಲಕ ಕೆ ಬಿ ಕ್ರಾಸ್ ಗೆ ಸಂಚರಿಸುವುದು.

ತಿಪಟೂರಿನಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಕೆ ಬಿ ಕ್ರಾಸ್ ನಿಂದ ಬಲಕ್ಕೆ ತಿರುಗಿ ತುರುವೇಕೆರೆ- ಟಿ ಬಿ ಕ್ರಾಸ್- ನಿಟ್ಟೂರು ಮೂಲಕ ತುಮಕೂರಿಗೆ ಸಂಚರಿಸುವುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share Post