Districts

ಮಗುವಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ..!

ಮಂಡ್ಯ: ನಾಗಮಂಗಲ ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಒಂದು ವರ್ಷದ ಹೆಣ್ಣು ಮಗುವಿಗೆ ವಿಷ ಕುಡಿಸಿ, ದಂಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

೨೮ ವರ್ಷ ರಘು ಹಾಗೂ ೨೪ ವರ್ಷದ ತನುಶ್ರೀ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ತನುಶ್ರೀ ಗಂಗವಾಡಿ ಗ್ರಾಮದವರಾಗದ್ದು, ರಘು ಮಂಡ್ಯ ನಗರದವರಾಗಿದ್ದರು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ತನುಶ್ರೀ, ರಘು ಹಾಗೂ ಮಗುವಿನೊಂದಿಗೆ ತವರಿಗೆ ಬಂದಿದ್ದರು.

ಆದರೆ ಅದೇನಾಯಿತೋ ಏನೋ ಇಬ್ಬರೂ ಸೇರಿ ಒಂದು ವರ್ಷ ಹೆಣ್ಣು ಮಗುವಿಗೆ ವಿಷವುಣಿಸಿ, ನೇಣಿಗೆ ಶರಣಾಗಿದ್ದಾರೆ.

Share Post