DistrictsPolitics

ಕನಕಪುರದಲ್ಲಿ ಬಿಜೆಪಿ ತಂತ್ರ ನಡೆಯಲ್ಲ; ಸಂಸದ ಡಿ.ಕೆ.ಸುರೇಶ್‌

ರಾಮನಗರ; ಕನಕಪುರದಲ್ಲಿ ಬಿಜೆಪಿ ಏನೇ ತಂತ್ರಗಾರಿಕೆ ನಡೆಸಿದರೂ ಅದು ನಡೆಯುವುದಿಲ್ಲ. ಮೋದಿ ಹಾಗೂ ಅಮಿತ್‌ ಶಾ ಅವರ ಯಾವುದೇ ತಂತ್ರಗಾರಿಕೆ ಫಲ ನೀಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಆರ್‌.ಅಶೋಕ್‌ ಸ್ಪರ್ಧೆ ಮಾಡೋದ್ರಿಂದ ನಮಗೇನೂ ತೊಂದರೆಯಾಗದು ಎಂದು ಹೇಳಿದ್ದಾರೆ.

ಈ ಹಿಂದೆ ನಾವು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೇ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ ಕನಕಪುರದಲ್ಲಿ ಬಿಜೆಪಿ ಯಾವ ತಂತ್ರಗಳು ಕೂಡಾ ನಡೆಯೋದಿಲ್ಲ ಎಂದು ಡಿ.ಕೆ.ಸುರೇಶ್‌ ಹೇಳಿದ್ದಾರೆ.

Share Post