DistrictsPolitics

ಸಿದ್ದರಾಮಯ್ಯಗೆ ಸ್ಟಾರ್‌ಗಳ ಅವಶ್ಯಕತೆ ಬಂದಿದ್ದು ಖುಷಿ ತಂದಿದೆ; ಸೋಮಣ್ಣ

ಮೈಸೂರು; ಸಿದ್ದರಾಮಯ್ಯ ಅವರು ನನಗೆ ಸಿಗುತ್ತಿರುವ ಜನಬೆಂಬಲ ನೋಡಿ ಹತಾಶರಾಗಿದ್ದಾರೆ. ಹೀಗಾಗಿ ಅವರು ಜನರನ್ನು ಸೇರಿಸಲು ಸ್ಟಾರ್‌ಗಳನ್ನು ಕರೆತರುತ್ತಿದ್ದಾರೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವರುಣಾದಲ್ಲಿ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ಅವರು ಒಂದೇ ದಿನ ಪ್ರಚಾರ ಮಾಡುತ್ತೇನೆ ಎಂದಿದ್ದರು. ಆದ್ರೀಗ ಪದೇ ಪದೇ ಬರುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ ಎಂದು ಹೇಳಿದರು.

ರಾಜ್‌ಕುಮಾರ್‌ ಅವರ ಕುಟುಂಬಕ್ಕೂ ನನಗೂ ನಲವತ್ತು ವರ್ಷಗಳ ಸಂಬಂಧವಿದೆ. ನಾನು ಗೋವಿಂದರಾಜನಗರ ಕ್ಷೇತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಲ್ಲಿ ದೊಡ್ಡ ಆಸ್ಪತ್ರೆಯನ್ನೇ ಕಟ್ಟಿದ್ದೇನೆ. ಆದರೂ ಶಿವರಾಜ್‌ ಕುಮಾರ್‌ ಯಾಕೆ ಹೀಗೆ ಮಾಡಿದರೋ ನನಗೆ ಗೊತ್ತಾಗುತ್ತಿಲ್ಲ ಎಂದು ವಿ.ಸೋಮಣ್ಣ ಇದೇ ವೇಳೆ ಹೇಳಿದರು.

ಸಿದ್ದರಾಮಯ್ಯ ತಮ್ಮ ಸ್ವಂತ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸ್ಟಾರ್‌ಗಳು ಅವಶ್ಯಕತೆ ಬಂದಿದೆ. ಇದೇ ನನಗೆ ಖುಷಿ ತಂದಿದೆ ಎಂದು ಸೋಮಣ್ಣ ಹೇಳಿದರು.ʼ

Share Post