CrimeDistricts

ವಸತಿ ಶಾಲೆ ಶಿಕ್ಷಕಿ ಕೊಲೆ ಮಾಡಿದ್ದು ಯಾಕೆ ಗೊತ್ತಾ..?; ಮಹಿಳೆಗೆ ಮಹಿಳೆಯೇ ಶತ್ರು

ಮೈಸೂರು; ಐದು ತಿಂಗಳ ಹಿಂದೆ ನಡೆದ ವಸತಿ ಶಾಲೆಯ ಶಿಕ್ಷಕಿ ಹತ್ಯೆ ಪ್ರಕರಣವನ್ನು ಕೊನೆಗೂ ಪೊಲೀಸರು ಬೇಧಿಸಿದ್ದಾರೆ. ನಂಜನಗೂಡು ನಗರಸಭೆ ಮಹಿಳಾ ಸದಸ್ಯೆಯೇ ಸುಪಾರಿ ಕೊಟ್ಟು ಈ ಕೊಲೆ ಮಾಡಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

  ನಂಜನಗೂಡಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸುಲೋಚನಾ(45 ) ಅವರನ್ನು ಮಾರ್ಚ್ 9 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಬಿಜೆಪಿಯ ನಂಜನಗೂಡು ನಗರಸಭೆಯ ಮಹಿಳಾ ಸದಸ್ಯೆ ಗಾಯತ್ರಿ ಮುರುಗೇಶ್, ಆಕೆಯ ಸಂಬಂಧಿಕರಾದ ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೃತ ಸುಲೋಚನಾರ ಗಂಡ 4 ವರ್ಷದ ಹಿಂದೆ ಮೃತಪಟ್ಟಿದ್ದರು. ಈಕೆಯೊಂದಿಗೆ ಬಂಧಿತ ಗಾಯತ್ರಿ ಅವರ ಗಂಡ ಮುರುಗೇಶ್ ಅಕ್ರಮ ಸಂಬಂಧ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಹಲವು ಬಾರಿ ಮನೆಯಲ್ಲಿ ಗಂಡನ ಜೊತೆ ಜಗಳವಾಡಿದ್ದ ಗಾಯತ್ರಿ, ಕೊನೆಗೆ ಶಿಕ್ಷಕಿಯನ್ನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

Share Post