DistrictsPolitics

ಸಿದ್ದರಾಮಯ್ಯರಂತಹ ದ್ರೋಹಿಯನ್ನು ನೋಡಿಯೇ ಇಲ್ಲ; ಈಶ್ವರಪ್ಪ

ಬಾಗಲಕೋಟೆ; ಸಿದ್ದರಾಮಯ್ಯರಂತಹ ದ್ರೋಹಿಯನ್ನು ನಾನು ಎಂದಿಗೂ ನೋಡಿಯೇ ಇಲ್ಲ. ಮುಂದೆಯೋ ನೋಡೋದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವ್ರು, ಸಿದ್ದರಾಮಯ್ಯಗೆ ಟಾಂಗ್‌ ಕೊಟ್ಟಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವೀಕ್ ಲೀಡರ್ ಅಂತ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಟಾಂಗ್‌ ಕೊಟ್ಟ ಈಶ್ವರಪ್ಪ, ಸಿದ್ದರಾಮಯ್ಯ ಅವರೇ ವೀಕ್ ಲೀಡರ್ ಆಗಿದ್ದರು. ಅದಕ್ಕೇ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಅಪ್ಪ, ಅಮ್ಮ ಯಾರೂ ಅಂತಾನೇ ಹೇಳ್ತಿಲ್ಲ. ಒಂದ್ಸಾರಿ ಬಾದಾಮಿ, ಒಂದ್ಸಾರಿ ಕೊಪ್ಪಳ ಅಂತೀರಿ, ಕೋಲಾರ ಅಂತೀರಿ, ಈಗ ವರುಣ ಅಂತೀರದೀರಿ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.

Share Post