CrimeDistricts

ಸೇತುವೆಗಾಗಿ ತೋಡಿದ್ದ ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್‌

ಮಂಡ್ಯ; ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ಫಲಕ ಹಾಕದ ಹಿನ್ನೆಲೆ ಚಾಲಕ ಗೊತ್ತಾಗದೇ ಸರ್ಕಾರಿ ಬಸ್‌ನ್ನು ಹಳ್ಳಕ್ಕೆ ಇಳಿಸಿರುವ ಘಟನೆ ಮಂಡ್ಯಯ ಮಾರೇಹಳ್ಳಿಯಲ್ಲಿ ನಡೆದಿದೆ. ನೂತನ ಸೇತುವೆ ನಿರ್ಮಾಣಕ್ಕಾಗಿ ಹಳ್ಳ ತೋಡಿದ್ದು, ಅಲ್ಲಿ ಹಳ್ಳ ತೋಡಿದ್ದರ ಬಗ್ಗೆ ಯಾವುದೇ ಫಲಕ ಹಾಕಿಲ್ಲ. ಹೀಗಾಗಿ ಹಳ್ಳವನ್ನು ಗಮನಿಸದ ಚಾಲಕ ಬಸ್ಸನ್ನು ನುಗ್ಗಿಸಿದ್ದು, ಅದು ಹಳ್ಳಕ್ಕೆ ಬಿದ್ದಿದೆ.

ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದ್ರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸರ್ಕಾರಿ ಬಸ್ ತಲಕಾಡಿನಿಂದ ಮಳವಳ್ಳಿಗೆ ತೆರಳುತ್ತಿತ್ತು. ಈ ವೇಳೆ ಮಾರೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬಂದಾಗ ಈ ದುರ್ಘಟನೆ ನಡೆದಿದೆ.

 

Share Post