Districts

200ಕ್ಕೂ ಹೆಚ್ಚು ಆನೆಗಳ ದಾಳಿ; ಅಡಿಕೆ, ಕಾಫಿ ತೋಟಗಳ ನಾಶ

ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ಎಸ್ಟೇಟ್‌ಗೆ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ, ಬೆಳೆ ಹಾನಿ ಮಾಡಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೆಲವು ತಿಂಗಳಿಂದ ಕಾಡಾನೆಗಳು ಬೈಕೆರೆ, ನಾಗರ, ಸುಂಡೇಕೆರೆ, ಹಲಸುಲಿಗೆ, ಕಾಟಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ. ಹತ್ತಾರು ಆನೆಗಳ ಹಿಂಡು ಒಮ್ಮೆಗೇ ನುಗ್ಗಿ ಬೆಳೆ ಹಾಗೂ ಆಸ್ತಿ ಹಾನಿ ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಕೆರೆ ಎಸ್ಟೇಟ್‌ನಲ್ಲಿ 200ಕ್ಕೂ ಹೆಚ್ಚು ಅಡಿಕೆ, ಕಾಫಿ ಗಿಡಗಳು, ತೋಟದ ಬೇಲಿ, ಕೆರೆಯ ಏರಿಗಳನ್ನು ನಾಶ ಮಾಡಿವೆ. ಕಾಗಿನಹರೆ ಕೃಷ್ಣೇಗೌಡ ತೋಟದಲ್ಲಿ 100 ಅಡಿಕೆ ಗಿಡಗಳು, 50 ಕಾಫಿ ಗಿಡಗಳನ್ನು ನಾಶ ಮಾಡಿವೆ.

Share Post