BengaluruCrime

ಬೆಂಗಳೂರಲ್ಲಿ ಮಗನನ್ನೇ ಇರಿದು ಕೊಂದ ಅಪ್ಪ!

ಬೆಂಗಳೂರು; ಸ್ವಂತ ಅಪ್ಪನೇ ಮಗನನ್ನು ಇರಿದು ಕೊಂದಿದ್ದಾನೆ.. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ರಾತ್ರಿ ಕುಡಿಯಲು ಹೋಗಿದ್ದ ಅಪ್ಪ ಬೈಕ್ ಅಲ್ಲೇ ಬಿಟ್ಟು ಬಂದಿದ್ದ.. ಬೆಳಗ್ಗೆ ಈ ಬಗ್ಗೆ ಕೇಳಿದಾಗ ಚಾಕುವಿನಿಂದ ಇರಿದಿದ್ದು, ಮಗ ಸಾವನ್ನಪ್ಪಿದ್ದಾನೆ..

   27 ವರ್ಷದ ಅಂಜನ್ ಕುಮಾರ್ ಎಂಬಾತಾನೆ ಕೊಲೆಯಾದ ಮಗ. 57 ವರ್ಷದ ವೆಂಕಟೇಶ್ ಕೊಲೆ ಮಾಡಿದ ಅಪ್ಪ.. ವೆಂಕಟೇಶ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾನೆ.. ಇವರಿಗೆ ಮಗ ಹಾಗೂ ಮಗಳು ಇದ್ದರು. ಮಗಳಿಗೆ ಸ್ಕೂಟರ್ ಕೊಡಿಸಿದ್ದರು.. ರಾತ್ರಿ ಆ ಸ್ಕೂಟರ್ ತೆಗೆದುಕೊಂಡು ಹೋಗಿದ್ದ ವೆಂಕಟೇಶ್ ಕುಡಿದ ಮತ್ತಿನಲ್ಲಿ ಕೀ ಕಳೆದುಕೊಂಡಿದ್ದ.. ಅದಕ್ಕೆ ಬೈಕ್ ಅಲ್ಲೇ ಬಿಟ್ಟು ಬಂದಿದ್ದ.. ಬೆಳಗ್ಗೆ ಮಗ ಹಾಗೂ ತಂದೆಗೆ ಇದೆ ವಿಚಾರವಾಗಿ ಜಗಳ ಆಗಿದೆ. ಈ ವೇಳೆ ಮಗ ಹೆಲ್ಮೆಟ್ ನಿಂದ ತಂದೆಗೆ ಹೊಡೆದಿದ್ದಾನೆ.. ಇದರಿಂದ ಕೋಪಗೊಂಡ ತಂದೆ ಚಾಕು ತಂದು ಮಗನಿಗೆ ಇರಿದಿದ್ದಾನೆ.. ಇದ್ರಿಂದ ತೀವ್ರ ರಕ್ತಸ್ರಾವ ವಾಗಿ ಮಗ ಅಂಜನ್ ಸಾವನ್ನಪ್ಪಿದ್ದಾನೆ..

  ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Share Post