CrimeNational

4 ವರ್ಷದ ಮಗುವಿನ ಹತ್ಯೆ ಪ್ರಕರಣ; ಪೊಲೀಸ್‌ ಠಾಣೆಯಲ್ಲೇ ಕಿತ್ತಾಡಿದ ಗಂಡ-ಹೆಂಡತಿ

ಗೋವಾ; ಬೆಂಗಳೂರು ಮೂಲದ ಉದ್ಯಮಿ ಸುಚನಾ ಸೇಠ್‌, ಗೋವಾದಲ್ಲಿ ನಾಲ್ಕು ವರ್ಷದ ಮಗುವನ್ನು ಕೊಂದಿದ್ದಳು. ಈಗ ಆಕೆ  ಗೋವಾದ ಕಲಗುಂಟ್‌ ಪೊಲೀಸರ ವಶದಲ್ಲಿದ್ದಾರೆ. ಪೊಲೀಸರು ಸುಚನಾ ಸೇಠ್‌ ಗಂಡ ವೆಂಕಟರಾಮನ್‌ ಅವರಿಂದ ಹೇಳಿಕೆ ಪಡೆಯಲು ಪೊಲೀಸ್‌ ಠಾಣೆಗೆ ಕರೆಸಿದ್ದರು. ಈ ವೇಳೆ ವೆಂಕಟರಾಮನ್‌, ನನ್ನ ಮಗುವನ್ನು ಯಾಕೆ ಕೊಂದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸುಚನಾ ಸೇಠ್‌ ರಂಪಾಟ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.

ನಾನು ಮಗುವನ್ನು ಕೊಂದಿಲ್ಲ. ನಾನು ಪೊಲೀಸ್‌ ಕಸ್ಟಡಿಯಲ್ಲಿದ್ದೇನೆ. ನೀನು ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದೀಯ ಎಂದು ಸುಚನಾ ಸೇಠ್‌ ಗಂಡನ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ತಿಳಿದುಬಂದಿದೆ. ನನ್ನ ಪರಿಸ್ಥಿತಿಗೆ ಗಂಡನೇ ಕಾರಣ ಎಂದೂ ಆಕೆ ಆರೋಪ ಮಾಡಿದ್ದಾಳಂತೆ.

ಇನ್ನು ಸುಚನಾಳ ಪೊಲೀಸ್‌ ಕಸ್ಟಡಿ ಅವಧಿ ಇಂದಿನಿಗೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇಂದು ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

 

Share Post