Crime

ಮೃತ ಮಗುವಿಗೆ ಜನ್ಮ ನೀಡಿ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಸಾವು

ಕಾನ್ಪುರ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಮೃತ ಮಗುವುಗೆ ಜನ್ಮ ನೀಡಿ ಸಾವನ್ನಪ್ಪಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಘಟನೆ ಸಂಬಂಧಪಟ್ಟಂತೆ ಕಂದಾಯ ಅಧಿಕಾರಿ ರಂಜಿತ್‌ ಬರ್ವಾರ್‌ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ೧೫ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪದಡಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಅಲ್ಲದೆ ಅಪ್ರಾಪ್ತೆ ಗರ್ಭಿಣಿ ಎಂದು ಗೊತ್ತಾದ ಮೇಲೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಹೇಳಲಾಗ್ತಿದೆ. ಆದ್ರೂ ಈ ಬಗ್ಗೆ ಇದುವರೆಗೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮೊನ್ನೆ ಮಂಗಳವಾರ ಬಾಲಕಿ ಆರೋಗ್ಯ ಹದಗೆಟ್ಟಾಗ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಾಥಮಿಕ ಚಿಕಿತ್ಸೆ ಬಳಿಕ ಮೆಟರ್ನಿಟಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ರು. ಆಸ್ಪತ್ರಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತ ಮಗುವಿಗೆ ಜನ್ಮ ನೀಡಿ ತಾನೂ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ನ್ಯಾಯಕ್ಕಾಗಿ ಮೃತ ಬಾಲಕಿ ಪೋಷಕರು ಪ್ರತಿಭಟಸಿದಾಗ ಗುರುವಾರ ಕಂದಾಯ ಅಧಿಕಾರಿ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಜೊತೆಗೆ ಕಂದಾಯ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಬಂಧನದ ಸುದ್ದಿ ತಿಳಿದ ಬಳಿಕ ಮುಂದಿನ ಕಾರ್ಯಗಳನ್ನು ಬಾಲಕಿ ಪೋಷಕರು ಕೈಗೊಂಡಿದ್ದಾರೆ.

Share Post