Bengaluru

ಅಕ್ಕಿ ಪೂರೈಕೆಗೆ ಮೂರು ರಾಜ್ಯಗಳಿಂದ ಒಪ್ಪಿಗೆ; ವಾರದಲ್ಲಿ ಎಲ್ಲವೂ ಫೈನಲ್‌

ಬೆಂಗಳೂರು; ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಟೆಂಡರ್‌ ಪ್ರಕ್ರಿಯೆ ಮೂಲಕ ಅಕ್ಕಿ ಖರೀದಿ ಮಾಡುತ್ತಿದ್ದು, ಅಕ್ಕಿ ಪೂರೈಕೆಗೆ ಮೂರು ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಒಂದು ವಾರದಲ್ಲಿ ಈ ಬಗ್ಗೆ ಫೈನಲ್‌ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಇನ್ನೊಂದು ವಾರದಲ್ಲಿ ಫೈನಲ್‌ ಮಾಡಿ ಅಕ್ಕಿ ತರಿಸಲಾಗುತ್ತದೆ ಎಂದು ಹೇಳಿದರು.

ಅಕ್ಕಿ ಕೊಳ್ಳುವ ಸಂಬಂಧ ಸದ್ಯ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೇವೆ. ಅಕ್ಕಿ ಬೆಲೆ ನಿಗದಿ ಮಾಡುವ ಸಂಬಂಧ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ರಾಜ್ಯ ಬಡವರಿಗೆ ಹತ್ತು ಕೆಜಿ ಉಚಿತ ಪಡಿತರ ಅಕ್ಕಿ ನೀಡುತ್ತೇವೆ ಎಂದು ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ.

 

Share Post