BengaluruPolitics

ಸಂಸತ್ತಿನಲ್ಲಿ ಭದ್ರತಾಲೋಪ ಪ್ರಕರಣ; ಸಂಸದ ಪ್ರತಾಪ ಸಿಂಹ ಪರ ಅಭಿಯಾನ

ಬೆಂಗಳೂರು; ನಿನ್ನೆ ಇಬ್ಬರು ಯುವಕರು ಲೋಕಸಭಾ ಕಲಾಪಕ್ಕೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ್ದರು. ಈ ಯುವಕರಿಗೆ ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಪಾಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೇರಿ ವಿಪಕ್ಷಗಳ ನಾಯಕರು ಪ್ರತಾಪ ಸಿಂಹ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಹಲವು ಪ್ರತಾಪ ಸಿಂಹ ಬೆಂಬಲಿಗರು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಾಪ ಸಿಂಹ ಪರ ಅಭಿಯಾನ ಶುರು ಮಾಡಿದ್ದಾರೆ.

ಅಧ್ಯಯನಕ್ಕಾಗಿ ಸಂಸತ್ತಿಗೆ ಹೋಗಲು ಪ್ರತಾಪ ಸಿಂಹ ಅವರು ಅವಕಾಶ ಕೊಟ್ಟಿದ್ದಾರೆ. ಆದ್ರೆ ಅದನ್ನು ಆ ಯುವಕರು ದುರುಪಯೋಗ ಮಾಡಿಕೊಂಡಿದ್ದಾರೆ. ಇದರಲ್ಲಿ ಪ್ರತಾಪ ಸಿಂಹ ಅವರ ಯಾವುದೇ ತಪ್ಪಿಲ್ಲ. ಅವರಿಗೆ ಕೆಟ್ಟ ಹೆಸರು ತರುವುದಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

 

Share Post