BengaluruCinema

ಅಣ್ಣನಿಗೆ ಚಿನ್ನದ ಅಭಿಷೇಕ ಮಾಡಿದ ರಜಿನಿ ಕಾಂತ್‌

ಬೆಂಗಳೂರು; ಶೂಟಿಂಗ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌, ತಮ್ಮ ಸಹೋದರನ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ರಜಿನಿ ಸಹೋದರ ಸತ್ಯನಾರಾಯಣ್ ಗಾಯಕವಾಡ ಅವರು 80ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂಭ್ರದಲ್ಲಿ ಭಾಗಿಯಾಗಿದ್ದ ರಜಿನಿಕಾಂತ್‌ ಅವರು, ಅಣ್ಣನಿಗೆ ಚಿನ್ನದ ನಾಣ್ಯಗಳಿಂದ ಅಭಿಷೇಕ ಮಾಡಿ ಗೌರವ ಸಮರ್ಪಿಸಿದ್ದಾರೆ.

ರಜಿನಿಕಾಂತ್‌ ಅವರು ಈ ಮಟ್ಟಕ್ಕೆ ಬೆಳೆಯೋದಕ್ಕೆ ಸಹೋದರ ಸತ್ಯನಾರಾಯಣ್‌ ಅವರೇ ಕಾರಣವಂತೆ. ಹಾಗಂತ ರಜಿನಿಕಾಂತ್‌ ಅವರೇ ಬರೆದುಕೊಂಡಿದ್ದಾರೆ. ರಜಿನಿಕಾಂತ್‌ ತಮ್ಮ ಸಹೋದರನನ್ನು ಚಿನ್ನದ ಮನುಷ್ಯ ಎಂದು ಕರೆದಿದ್ದಾರೆ. ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಅಣ್ಣ ಕಾರಣ. ಚಿನ್ನದ ಹೃದಯಕ್ಕೆ ಚಿನ್ನದ ಮಳೆಯ ಸುರಿಮಳೆ ಎಂದು ರಜಿನಿಕಾಂತ್‌ ಫೋಟೋಗಳ ಸಮೇತ ಬರೆದು ಖುಷಿ ಹಂಚಿಕೊಂಡಿದ್ದಾರೆ.

Share Post