BengaluruPolitics

ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು; ಶಾಸಕ ಪಿ.ರಾಜೀವ್‌

ಬೆಂಗಳೂರು; ಎಸ್‌ಸಿ, ಎಸ್‌ಟಿ SCP-TSP ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರುಯ ಸಿಎಂ ಆಗಿದ್ದಾಗಲೇ ಇದಕ್ಕೆ ಅನುಮತಿ ನೀಡಲಾಗಿತ್ತು ಎಂದು ಕುಡುಚಿ ಶಾಸಕ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ SCP-TSP ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್‌, ಸಿದ್ದರಾಮಯ್ಯ ಅವರು ಸುಳ್ಳು ಅಂಕಿ ಅಂಶಗಳಮ್ಮಿ ಕೊಡುವುದರಲ್ಲಿ ನಿಸ್ಸೀಮರು ಎಂದು ಲೇವಡಿ ಮಾಡಿದರು. SCP-TSP ಹಣ ಬೇರೆಡೆ ಬಳಸಿಕೊಳ್ಳಲು 7Dಯನ್ನು ಸೇರಿಸಿದ್ದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಆಗಲೇ ಹಣ ಡೈವರ್ಷನ್‌ ಮಾಡಿ, ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ SC-ST ಪರವಾಗಿಯೇ ಕೆಲಸ ಮಾಡುತ್ತಿದೆ ಎಂದು ರಾಜೀವ್‌ ಹೇಳಿದರು.

Share Post