BengaluruPolitics

ತಮ್ಮ ದೂರದೃಷ್ಟಿ ಏನು ವಿಜಯೇಂದ್ರ ಬಹಿರಂಗಪಡಿಸಲಿ; ವಿ.ಸೋಮಣ್ಣ

ಬೆಂಗಳೂರು; ಬಿ.ವೈ.ವಿಜಯೇಂದ್ರ ಅವರು ಯಡಿಯೂರಪ್ಪ ಹೆಸರನ್ನು ಬಿಟ್ಟು ತಮ್ಮ ದೂರದೃಷ್ಟಿ ಏನು ಅನ್ನೋದು ಬಹಿರಂಗಪಡಿಸಬೇಕು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ವಿಜಯೇಂದ್ರ ಅವರು ಏನಾದರೂ ಮಾತಾಡಿಕೊಳ್ಳಲಿ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇವಲ ವಿಜಯೇಂದ್ರ ಒಬ್ಬರಿಗೆ ನಾಯಕರಲ್ಲ, ನಮ್ಮೆಲ್ಲರಿಗೂ ನಾಯಕರು ಎಂದಿರುವ ಸೋಮಣ್ಣ, ವಿಜಯೇಂದ್ರ ಏನು ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಎಂದೂ ಕೂಡಾ ಹೇಳಿಲ್ಲ, ಹೇಳೋದೂ ಇಲ್ಲ. ನಾನು ಯಾವ ಕಾರಣಕ್ಕೂ ಪಕ್ಷ ತೊರೆಯೋದಿಲ್ಲ ಎಂದು ವಿ.ಸೋಮಣ್ಣ ಇದೇ ವೇಳೆ ತಿಳಿಸಿದರು. ವರಿಷ್ಠರ ಜೊತೆ ನಾನು ಚರ್ಚೆ ಮಾಡಿದ್ದೇನೆ. ಎಲ್ಲಾ ಗೊಂದಲಗಳನ್ನೂ ಅವರು ನಿವಾರಿಸಿದ್ದಾರೆ ಎಂದು ಸೋಮಣ್ಣ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

Share Post