Bengaluru

ವಿಧಾನಸಭಾ ಕಲಾಪದಲ್ಲೂ ಕೈ ನಾಯಕರ ಪ್ರತಿಭಟನೆ-ಪ್ರಶ್ನೋತ್ತರ ವೇಳೆಯಲ್ಲಿ ಸದನದ ಬಾವಿಗಿಳಿದು ಹೋರಾಟ

ವಿಧಾನಸಭೆ: ಇಂದಿನ ವಿಧಾನಸಭಾ ಕಲಾಪದಲ್ಲೂ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪ್ರಶ್ನೋತ್ತರ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಧರಣಿ ನಡುವೆಯೇ ಜೆಡಿಎಸ್‌ ಶಾಸಕರು ತಮ್ಮ ಪ್ರಶ್ನೋತ್ತರಗಳನ್ನು ಸಭಾಪತಿ ಮುಂದಿಟ್ಟರು.

ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಧರಣಿ ಮುಂದುವರೆಸಿದ್ರು. ವಜಾ ಮಾಡಿ ವಜಾ ಮಾಡಿ..ಈಶ್ವರಪ್ಪರನ್ನು ವಜಾ ಮಾಡಿ, ಈಶ್ವರಪ್ಪ ದೇಶದ್ರೋಹಿ, ನ್ಯಾಯ ಕೊಡಿ ನ್ಯಾಯ ಕೊಡಿ, ಧಿಕ್ಕಾರ ಧಿಕ್ಕಾರ ಎಂದು ಸದನದ ಬಾವಿಗಿಳಿದು ಘೋಷಣೆ ಕೂಗಿದ್ದಾರೆ.

ಇನ್ನುಳಿದಂತೆ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯಬೇಕಾಗಿರುವ ಕೆಲಸ ಕುರಿತು ಸಭಾಪತಿಯವರಿಗೆ ಮನವಿ ಮಾಡಿದ್ರು. ನೀಡಬೇಕಾಗಿರುವ ಅನುದಾನ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಸರ್ಕಾರದಲ್ಲಿ ಮನವಿ ಮಾಡಿಕೊಂಡರು.

Share Post