BengaluruCrimePolitics

ನಮ್ಮ ಬಳಿ ಯಾರೂ ಕಮೀಷನ್ ಕೇಳಿಲ್ಲ; ಕೆಂಪಣ್ಣ

ಬೆಂಗಳೂರು; ನಾವ್ಯಾರೂ ಈ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಮಾಡಿಲ್ಲ. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು ಅಷ್ಟೇ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಲ್ ಪಾವತಿ ಮಾಡುವಂತೆ ಸರ್ಕಾರವನ್ನು ಕೇಳಿದ್ದೇವೆ ಅಷ್ಟೆ ಎಂದು ಹೇಳಿದರು. ಮುಖ್ಯಮಂತ್ರಿ ಬಳಿ‌ ಮನವಿ ಮಾಡಿದ್ದೆವು ಹಣ ಬಿಡುಗಡೆ ಮಾಡಿ ಅಂತ. ಮೂರು ವರ್ಷದಿಂದ ಬಿಲ್ ಪಾವತಿ ಆಗಿಲ್ಲ ಎಂದು ಹೇಳಿದ್ದೆವು. ಸಿಎಂ ಸಮಯ ಬೇಕು ಎಂದಿದ್ದರು ಎಂದು ಕೆಂಪಣ್ಣ ಹೇಳಿದ್ದಾರೆ.

ಯಾವ ಸಚಿವರೂ ಕೂಡಾ ನಮ್ಮ ಬಳಿ ಕಮಿಷನ್ ಕೇಳಿಲ್ಲ. ರಾಜ್ಯದ ಯಾವುದೆ ಗುತ್ತಿಗೆದಾರ ನನ್ನ ಬಳಿ ದೂರು ಹೇಳಿಲ್ಲ. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.

Share Post