BengaluruPolitics

ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ ರಾಜೀನಾಮೆ; ಕಾಂಗ್ರೆಸ್‌ ಸೇರಲು ತಯಾರಿ

ಬೆಂಗಳೂರು; ಹಲವು ವರ್ಷಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡೇ ಬಂದಿದ್ದ ಗುಬ್ಬಿ ಶಾಸಕ ಆರ್‌.ಶ್ರೀನಿವಾಸ್‌ ಕೊನೆಗೂ ತಮ್ಮ ಶಾಸಕ ಸ್ಥಾನ ತೊರೆದಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರು ಇದೀಗ ಕಾಂಗ್ರೆಸ್‌ ಸೇರಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗುಬ್ಬಿ ಕ್ಷೇತ್ರದಿಂದ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ.

ಜೆಡಿಎಸ್‌ ನಾಯಕರ ಜೊತೆ ಅಸಮಾಧಾನಗೊಂಡಿದ್ದ ಶಾಸಕ ಶ್ರೀನಿವಾಸ್‌ ಅವರು, ಕಾಂಗ್ರೆಸ್‌ ಜೊತೆ ಹೆಚ್ಚು ಗುರುತಿಸಿಕೊಂಡಿದ್ದರು. ಜೆಡಿಎಸ್‌ ನಾಯಕರ ವಿರುದ್ಧ ಆಗಿಂದಾಗ್ಗೆ ವಾಗ್ದಾಳಿಗಳನ್ನು ಕೂಡಾ ನಡೆಸುತ್ತಾ ಬಂದಿದ್ದರು. ಈ ನಡುವೆ ಜೆಡಿಎಸ್‌ ವರಿಷ್ಠರು ಕೂಡಾ ಗುಬ್ಬಿ ಶ್ರೀನಿವಾಸರನ್ನು ಪಕ್ಷದಿಂದ ದೂರ ಇಟ್ಟಿದ್ದರು. ಇದೀಗ ಶ್ರೀನಿವಾಸ್‌ ಅವರಯ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದು, ಸ್ವಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Share Post