BengaluruCrime

ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆ ಯತ್ನ

ಬೆಂಗಳೂರು; ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಕೊಲೆ ಯತ್ನ ನಡೆದಿದೆ. ಮಂತ್ರಿಮಾಲ್ ಬಳಿಯ ನಟರಾಜ ಥಿಯೇಟರ್ ಹತ್ತಿರ ಇಂದು ಬೆಳಗ್ಗೆ 8-30ರ ಸಮಯದಲ್ಲಿ ಆಟೋದಲ್ಲಿ ಬಂದಿದ್ದ ನಾಲ್ವರು ಮಾಸ್ಕ್ ಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹೋಂಡಾ ಆ್ಯಕ್ಟೀವಾದಲ್ಲಿ ಬರುತ್ತಿದ್ದ ಗಣೇಶ್​​ ಎಂಬುವವರನ್ನು ಅಡ್ಡಗಟ್ಟಿ ಮಚ್ಚು ಲಾಂಗ್​​ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

   ನೇರವಾಗಿ ತಲೆಯನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ. ಗಣೇಶ್‌ ಸತ್ತಿದ್ದಾನೆ ಎಂದು ಭಾವಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದವನನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಣೇಶನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕುಟುಂಬದಲ್ಲೇ ಮನಸ್ತಾಪ ಇದ್ದ ಹಿನ್ನೆಲೆ ಜಗಳ ನಡೆದು ಗಣೇಶ್​​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 2020 ರಲ್ಲಿ ಕಿನೋ ಥಿಯೇಟರ್ ಬಳಿ ಯುವಕನೊಬ್ಬನನ್ನ ಕೊಂದಿರುವ ಆರೋಪ ಕೂಡಾ ಗಣೇಶ್‌ ಮೇಲಿದೆ.

Share Post