BengaluruCrime

ಡಿಸಿಪಿ ಮಗನಂತೆ, ಸಿಎಂ ಸಂಬಂಧಿಯಂತೆ!; ಈತನ ದರ್ಪ ನೋಡಿ!

ಬೆಂಗಳೂರು; ಯುವಕನೋರ್ವ ತಾನು ಸಿಎಂ ಸಂಬಂಧಿ, ಡಿಸಿಪಿ ಮಗ ಎಂದು ಹೇಳಿಕೊಂಡು ದರ್ಪ ತೋರಿಸಿದ್ದಾನೆ.. ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ.. ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ.

  ಸೆಕ್ಯೂರಿಟಿ ಗಾರ್ಡ್ ಪುನೀತ್ ಹಲ್ಲೆಗೊಳಗದವರು. ವರುಣ್ ಎಂಬಾತಾನೆ ಹಲ್ಲೆ ಮಾಡಿದಾತ.. ದೊಡ್ಡಬೆಲೆಯ ಪ್ರಾವಿಡೆಂಟ್ ಸನ್​ವರ್ತ್​​ ಅಪಾರ್ಟ್​ಮೆಂಟ್​ ಸೆಕ್ಯೂರಿಟಿ ಗಾರ್ಡ್ ಪುನೀತ್ ಮೇಲೆ ಹಲ್ಲೆ ಮಾಡಲಾಗಿದೆ.

  ಕಳೆದ ರಾತ್ರಿ 12 ಗಂಟೆಗೆ ವರುಣ್ ಎಂಬಾತ ಅಪಾರ್ಟ್ಮೆಂಟ್​ಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಕರೆತಂದಿದ್ದ. ಇದರಿಂದ ಅನುಮಾನಗೊಂಡ ಸೆಕ್ಯೂರಿಟಿ ಗಾರ್ಡ್ ಪುನೀತ್ ಅಪರಿಚಿತರಿಗೆ ಪ್ರವೇಶವಿಲ್ಲ ಎಂದಿದ್ದಾನೆ. ಇದರಿಂದ ಕೆರಳಿ ಹಲ್ಲೆ ಮಾಡಲಾಗಿದೆ.

 

Share Post