Bengaluru

ಕಾಂಗ್ರೆಸ್‌ ನವ ಸಂಕಲ್ಪ ಶಿಬಿರ; ಸಭೆಯ ತೀರ್ಮಾನ ಹೊರಹೋಗಬಾರದು – ಡಿಕೆಶಿ ಖಡಕ್‌ ಸೂಚನೆ

ಬೆಂಗಳೂರು; ಬೆಂಗಳೂರಿನಲ್ಲಿ ಕಾಂಗ್ರೆಸ್‌ ನವ ಸಂಕಲ್ಪ ಶಿಬಿರ ನಡೆಯುತ್ತಿದೆ. ಇದ್ರರಲ್ಲಿ ಆಯ್ದ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಭೆಯಲ್ಲಾಗುವ ತೀರ್ಮಾನ ಮಾಧ್ಯಮಗಳಿಗೆ ಹೇಳುವ ಹಾಗಿಲ್ಲ ಎಂದು ಖಡಕ್‌ ಸೂಚನೆ ಕೊಟ್ಟಿದ್ದಾರೆ.

ಯಾರೂ ಕೂಡಾ ಸಭೆಯಲ್ಲಾಗುವ ತೀರ್ಮಾನಗಳನ್ನು ಹೊರಕ್ಕೆ ತಿಳಿಸಬಾರದು. ಹಾಗೇನಾದರೂ ಆದ್ರೆ ನಿಮ್ಮನ್ನು ಬೇರೆ ರೀತಿ ನೋಡಬೇಕಾಗುತ್ತದೆ. ಆಫ್‌ ದಿ ರೆಕಾರ್ಡ್‌, ಆನ್‌ ದಿ ರೆಕಾರ್ಡ್‌ ಕೂಡಾ ಹೇಳುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share Post