Districts

ಕಾರಿಗೆ ಮದುವೆ ಅಲಂಕಾರ; ಕಳ್ಳರ ಪ್ಲ್ಯಾನ್‌ ಠುಸ್‌..!

ಉಡುಪಿ: ಹಸುಗಳನ್ನು ಕಳ್ಳತನ ಮಾಡಿ ಸಾಗಿಸಲು ಕಾರಿಗೆ ಮದುವೆ ಸಿಂಗಾರ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕಳ್ಳರ ಪ್ಲ್ಯಾನ್‌ ಠುಸ್‌ ಆಗಿದೆ.

ಹೌದು, ಉಡುಪಿಯಲ್ಲಿ ಹಸುಗಳನ್ನು ಕಳ್ಳತನ ಮಾಡಲು ಕಳ್ಳರು ಹೊಸ ಪ್ಲ್ಯಾನ್‌ ರೂಪಿಸಿದ್ದಾರೆ. ಕಾರಿಗೆ ಹೂವುಗಳಿಂದ ಸಿಂಗಾರ ಮಾಡಿ, ಮುಂದೆ ವೆಡ್ಡಿಂಗ್‌ ಬೋರ್ಡ್‌ ಹಾಕುತ್ತಾರೆ. ಆಗ ಯಾವುದೋ ಮದುವೆ ಕಾರು ಇರಬಹುದು ಎಂದು ಯಾರೂ ಪರೀಕ್ಷೆ ಮಾಡಲು ಹೋಗುವುದಿಲ್ಲ.

ಹೀಗೆ ಎಷ್ಟು ದಿನದಿಂದ ನಡೆಯುತ್ತಿತ್ತೋ ವ್ಯವಹಾರ. ಆದ್ರೆ ಇವತ್ತು ಕಳ್ಳರ ಗ್ಯಾಂಗ್‌ ಸಿಕ್ಕಿಬಿದ್ದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪರಿಶೀಲನೆ ವೇಳೆ ಈ ದಂಧೆ ಬಯಲಾಗಿದ್ದು, ಸುಮಾರು ೧೫ ಕರುಗಳನ್ನು ರಕ್ಷಿಸಲಾಗಿದೆ.

Share Post