Districts

ಹೊಸ ವರ್ಷಾಚರಣೆ – ರಾಯರ ಸನ್ನಿಧಿಯಲ್ಲಿ ಜನವೋ ಜನ

ರಾಯಚೂರು : ಹೊಸ ವರ್ಷದ ಪ್ರಯುಕ್ತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುರಸ್ಕಾರ ನೆರವೇರುತ್ತಿದೆ. ರಾಯರ ಸನ್ನಿಧಿ ಮಂತ್ರಾಲಯದಲ್ಲೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡು ಹರಿದು ಬಂದಿತ್ತು.

ಓಮಿಕ್ರಾನ್‌ ಭಯದಲ್ಲಿಯೂ ನಾನಾ ಕಡೆಯಿಂದ ಭಕ್ತಾದಿಗಳು ರಾಯರ ದರ್ಶನ ಪಡೆಯಲು ಬಂದಿದ್ದರು. ತುಂಗಾ ನದಿಯಲ್ಲಿ ಮಿಂದೆದ್ದು ರಾಯರ ದರ್ಶನ ಮಾಡಿದ್ದಾರೆ. ರಾಯರ ಸನ್ನಿಧಿಗೆ ನೀವು ಯಾವಾಗ ಹೋದರು ನಿಮಿಷಗಳಲ್ಲಿ ದರ್ಶನ ಮುಗಿಸಿ ಬರಬಹುದು ಆದರೆ ಇಂದು ಮಾತ್ರ ಜನರು ತುಸು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

 

Share Post